Friday, October 26, 2012

ಕೊನೆ ಬರಹ...


                                    ಕೊನೆ ಬರಹ...


               ನನ್ನ್ ಹೃದಯ ಇವತ್ಯಾಕ್ಕೋ ತುಂಬಾ ಖುಷಿಯಾಗಿದೆ ಕಣೋ... ಕಳೆದ 27 ವರ್ಷಗಳಿಂದ ಕೆಲಸ ಮಾಡಿ ಮಾಡಿ ನನ್ನ್ ಹೃದಯಕ್ಕೂ ಬೇಜಾರಾಗಿದೆ. ಅದರ ಕೆಲಸ ಇವತ್ತಿಗೆ ನಿಂತು ಹೋಗುತ್ತಲ್ಲ ಅಂತ ಅದುಕ್ಕೆ ಖುಷಿ ಆಗಿದೆ. 26 ವರ್ಷ ಮನೆಯವರು ನನ್ನ ಬದುಕಿಸಿದ್ದರು. ಕಳೆದ 11 ತಿಂಗಳಿಂದ ನಿನಗಾಗಿ ಬದುಕಿದ್ದೆ. ಆದರೆ 9 ತಿಂಗಳಿಂದ ಮನೆ ಬಿಟ್ಟು ಬಂದಗಿಂದಲೂ ನಾನು ನಿನ್ನಗೋಸ್ಕರನೆ ಬದುಕಿದ್ದೆ... ಆದರೆ ಈಗ.......... ನಿನ್ನೆ, ನಾನೇ ನಿನ್ನ ಬಿಟ್ಟೆನೋ ಅಥವಾ ನೀನೆ ನನ್ನಿಂದ ದೂರ ಆಗ್ತಾ ಇದಿಯೋ ಅಂತ ನನಗಂತು ಗೊತ್ತಾಗ್ತಾ ಇಲ್ಲ... ಇಷ್ಟು ದಿನ ನಿನಗಾಗಿ ಬದುಕಿದ್ದೆ ಇನ್ನು ಮುಂದೆ ಯಾರಿಗೋಸ್ಕರ ಅಂತ ಬದುಕಲಿ ಹೇಳು.... ಮನೆಯವರಿಲ್ಲ, ಜೊತೆಗೆ ನೀನು ಕೂಡ ಇವತ್ತು ನನ್ನ್ ಜೊತೆ ಇಲ್ಲ ಕಣೋ ಕಂದ.... ನಾನಿಗೆ ಯಾರು ಇಲ್ಲ ಅಂತ ನಿನಗೂ ಗೊತ್ತು. ಅದುಕ್ಕೆ ಸಾಯೋ ತೀರ್ಮಾನಕ್ಕೆ ಬಂದಿದೀನಿ. ಹೇಗೆ ಸಾಯ್ತಿನಿ, ಯಾವಾಗ ಸಾಯ್ತಿನಿ ಅಂತ ನನ್ನಗು ಗೊತ್ತಿಲ್ಲ... ನಿನ್ನ್ ಇಲ್ಲ ಅಂದ ಮೇಲೆ ನಾನು ಬದುಕಿದ್ದದರು ಏನು ಪ್ರಯೋಜನ ಹೇಳು...

              ನಾನು ಯಾವತ್ತು ದುರ್ಬಲ ಬುದ್ದಿ, ದುರ್ಬಲ ಮನಸ್ಥಿತಿ ಇರೋನು ಅಂತ ಅಂದುಕೊಂಡಿರಲಿಲ್ಲ. ಆದರೆ ಈ ಪರಿಸ್ಥಿತಿ ನನ್ನನು ಸಾವಿಗೆ ತಂದು ಬಿಟ್ಟಿದೆ....
ಚೇತನ್ (ಗಾಬರಿ) ನಿನ್ನ್ ಹೇಳಿದ್ದು ಸರಿ ಕಣೋ " ಮನೆಗೆ ಮಗ ಆಗಲಿಲ್ಲ, ಸ್ಮಶಾನಕ್ಕೆ ಹೆಣ ಆಗಲಿಲ್ಲ" ಅಂತ.. ಅದು ಇವತ್ತು ನನ್ನಗೆ ಅರ್ಥ ಆಗ್ತಾ ಇದೆ...
ನಾನು ಸಾಯಬೇಕು ಅಂದುಕೊಂಡಿದ್ದು ಪೂರ್ವನಿಯೋಜಿತವಲ್ಲ. ನನ್ನ ಸಾವಿಗೆ ಯಾರು ಕಾರಣರಲ್ಲ.

                       ಕೊನೆಯಾದಾಗಿ ಕಂದ, ನಾನು ನಿನ್ನ್ ಗೆ ಹೇಳ್ತಾ ಇದ್ದೆ ನಾನು ಕೊನೆವರೆಗೂ ನಿನ್ನೇ ಪ್ರೀತಿಸ್ತಿನಿ ಅಂತ. ಅಲ್ಲ ಕಣೋ ನಾನು ಸತ್ತ ಮೇಲು ನಿನ್ನೇ ಪ್ರೀತಿಸ್ತ ಇರ್ತಿನಿ. ಬದುಕಿದ್ದಾಗಲಾದರು ನಾನು ನಿನ್ನ ನೋಡಲಿಲ್ಲ, ನೀನು ನನ್ನ ನೋಡಲಿಲ್ಲ. ಒಂದೇ ಒಂದು ಸಲ ನಾನು ಸತ್ತ ಮೇಲಾದರೂ ನನ್ನ ಬಂದು ನೋಡ್ಕೊಂಡು ಹೋಗು.....

ದಿನಾಂಕ     
27/09/2012                     
                                                      -- ಇಂತಿ,
                                                ಹುಚ್ಚ, ನಿನ್ನ ಪ್ರೀತಿಯ ಹುಚ್ಚ .
                                                       ದಿನೇಶ್        



ಇಷ್ಟೇ ಕಣ್ರಪ್ಪ ಬರೆದಿದ್ದು.... ಅಷ್ಟೇ ನನ್ನ್ ಹುಡುಗಿ ಉಗುದ್ಲು ಉಗುದ್ಲು ಉಗುದ್ಲುssssssss ..... ಹೇಳಿ ಕೇಳಿ ನನ್ನ್ ಹುಡುಗಿ ತುಂಬಾ ಸ್ಟ್ರಾಂಗ್ ಬೇರೆ.... ನನ್ನ ಹುಚ್ಚು ಎಲ್ಲ ಬಿಡಿಸೇಬಿಟ್ಟಳು... ಅವಾಗಲೇ ನೋಡ್ರಿ ನನ್ನ ಕೈಗೆ ಹೊಸ ನೋಕಿಯಾ ೧೦೦ ಮೊಬೈಲ್ ಬಂದಿದ್ದು.....  ನೀವೇ ಏನೇ ಹೇಳಿ ನನ್ನ್ ಹುಡುಗಿ ನನ್ನ್ ಹುಡುಗಿನೇ....  ಕಂದ  ನನ್ನ್ ಕಡೆ ಇಂದ ಒಂದು ಪ್ರೀತಿಯ ಮುತ್ತು ಕಾಣೋ...... 

Saturday, September 22, 2012


                            ದಿನೇಶ್ 
                          ನಿಮ್ಮ ಆತ್ಮೀಯ ಗೆಳೆಯ,   
                           -- ಇಂತಿ,

ಒಳ್ಳೆ ಹುಡುಗರಿಗೆ ಉಳಿಗಾಲ ಇಲ್ಲ ಬಿಡಿ....
ಛೇ.... ಎಂಥಾ ಕಾಲ ಬಂತಪ್ಪ..... ನನ್ನ ಅಂತ ಒಳ್ಳೆ ಹುಡುಗರನ್ನು ಕೂಡ ಫ್ಲರ್ಟ್ ಅನ್ನೋ ಆಗೇ ಆಯ್ತಲ್ಲ....  

ನಮ್ಮೂರ್  ಹುಡುಗಿ ಹೇಳಿದ್ದು.... 

ನಾನು ಒಬ್ಬ ಫ್ಲರ್ಟ್ ಅಂತೆ....

ನೀವು ಕಂಡು ಕೇಳರಿಯದ ಸಂಗತಿ.

ಪ್ರೀತಿಯ ಗೆಳೆಯ/ಗೆಳತಿಯರೆ,


ನಾನೊಬ್ಬ ಫ್ಲರ್ಟ್........ 

Thursday, August 16, 2012

ನಾನು, ನನ್ನವಳೊಂದಿಗೆ ಮತ್ತು ನಿಮ್ಮೊಂದಿಗೆ.....


ನಾನು, ನನ್ನವಳೊಂದಿಗೆ ಮತ್ತು ನಿಮ್ಮೊಂದಿಗೆ..... 

22-02-2012...

    ನಾನು ಬರೆದ ಕಿತ್ತೊದ ಬರಹ ಮತ್ತು ನೀವು.....

ನನ್ನ ಬರಹ ಅಥವಾ ಕಥೆಗಳನ್ನು ಓದಿದ ಮತ್ತು ಓದದ ಎಲ್ಲಾ ಗೆಳೆಯ ಗೆಳತಿಯರೆಲ್ಲರಿಗೂ ಧನ್ಯಾವಾದಗಳು....

"ಒಂದೇ ಸಮನೆ ನೆನಸಿದೆ ನನ್ನೀ ಮನಸ್ಸು ನಿನಗಾಗಿ ನಿನಗಾಗಿ....."
ಈ ಸರಿ ರಾತ್ರಿ ನಾನು ಪದೇ ಪದೇ ಮಲಗುವ ಮುನ್ನವೂ ಗುನುಗುವಂತೆ ಮಾಡಿತು.... ಕಳೆದ ಒಂದು ತಿಂಗಳಿನಿಂದ ನನ್ನ ಹುಡುಗಿಯೊಂದಿಗೆ ಮಾತನಾಡದೆ ಪರಿತಪಿಸುತ್ತಿರುವ ಮನವು ಸಂತೋಷದಿ ಮುಳುಗಿ ತೇಲಿತ್ತು. ನನ್ನ ಮತ್ತು ನನ್ನ ಹುಡುಗಿಯ ಪ್ರೀತಿಯು ಚಿಗುರೊಡೆದು ಒಂಭತ್ತು ವಸಂತಗಳೇ ಸಂದರು ಅವಳನ್ನು ಪ್ರಥಮ ಬಾರಿಗೆ ಕಾಣಬೇಕೆಂಬ ಹಂಬಲ ದಿನೇ ದಿನೇ ಅತಿಯಾಗುತ್ತಿದೆ.. ಚಿನ್ನ ಒಮ್ಮೆಯಾದರು ನಿನ್ನ ಮೊರೆಯನ್ನು  ಈ ಹೃದಯದರಸನಿಗೆ ತೋರುವೆ....

ಕಳೆದ ಬಾರಿಯ ಹಾಗೇ ಆದೇ ತಂಡ ಮತ್ತು ಇನ್ನಷ್ಟು ಗೆಳೆಯರು (ಗೊಣ್ಣೆ, ಪ್ರಸಾದಿ, ಟೈಗರ್, ತೊಟ್ಟಿ ಮತ್ತು ಆನಂದ್) ಒಂದೆಡೆ ಸೇರಿದೆವು. ಮತ್ತೇ ಅಮಲೇರಿಸಿಕೊಂಡ ಹುಡುಗರೊಂದಿಗೆ ಮಧ್ಯರಾತ್ರಿ ಬನಶಂಕರಿಯ ಸುಬ್ಬನ ಮನೆಯ ಕಡೆ ಹೊರಟಾಗ ಭರ್ತಿ 12 ಗಂಟೆ. ರೂಮೊಳು  ಸೇರಿ ಮುಂಜಾವು ೪ರವರೆಗೂ ರಷ್ಯನ್ ರಮ್ಮಿ ಆಡಿದ್ದು .. ಅದರಲ್ಲಿ ಎರಡು ಬಾರಿಯೂ ನಾನು 1500 ಅಂಕಗಳನ್ನು ಪಡೆದಿದ್ದು. ಮತ್ತೇ ಮುಂಜಾನೆ 8 ಗಂಟೆಗೆ ಎದ್ದಾಗ ಹಿಂದಿನ ಸಂಜೆ ಬರುವೆ ಎಂದಿದ್ದ ಸೋಮಾರಿ ಪುಟ್ಟ ಅಂತು ಇಂತು ತನ್ನ ದರ್ಶನ ಕೊಟ್ಟನು..

ಗೊಣ್ಣೆಯ ತಮ್ಮಣ್ಣ-ತಿಮ್ಮಣ್ಣ, ಅಭಿಯ ಮೇಲಿಂದ ಮೇಲೆ ಹಾರಿ ಹಾಡು, ಗೊಣ್ಣೆಯು ತನ್ನ ಪ್ರೀತಿಯ ಗೆಳತಿಯ ಜಂಗಮವಾಣೆಯ ಕರೆ ಬಂದಾಗ ಚಂಗನೆ ಹಾರಿದ್ದು... ಸುಬ್ಬನ ಸಮಾಜ ಸೇವೆ, ದೇಶದ ಒಳಿತಿಗಾಗಿ ತನ್ನನ್ನೇ ತಾನು ಮುಡಿಪಿಟ್ಟುಕೊಂಡಿದ್ದು, ಇದರ ಮದ್ಯೆ ಊಟಕ್ಕಾಗಿ ನಾನು ಮತ್ತು ಅಭಿ ದಾರಿ ತಪ್ಪಿದ ಮಕ್ಕಳಂತೆ ರಸ್ತೆಯೆಲ್ಲ  ಸುತ್ತಾಡಿದ್ದು...    

                ಅಂದೇ ಸಂಜೆ ಮಸಾಲೆ ಪುರಿ ತಿನ್ನುವ ತವಕದಲ್ಲಿ ಎಲ್ಲಾರೂ ಎದ್ದು ಸೀತಾ ಸರ್ಕಲ್ ಕಡೆಗೆ ಸಾಗಿದೆವು... (ಸಿಗ್ನಲ್ ಬಿಡುವ ಮುನ್ನವೇ ವಾಹನ ದಟ್ಟಣೆ ಕಡಿಮೆಯಾಗುವುದು ಸೀತಾ ಸರ್ಕಲ್ ನ ಮತ್ತೊಂದು ವೈಶಿಷ್ಟ್ಯ...) ಅಲ್ಲೇ ಮಸಾಲೆ ಪುರಿ ತಿನ್ನುತ್ತಿದ್ದ ಬಾಲೆಯೆಡೆಗೆ ನಮೆಲ್ಲರ ಗಮನ ಸೆಳೆಯಿತು. ಅವಳು ತೊಟ್ಟಿದ್ದ ಅ ಕಪ್ಪು ವಸ್ತ್ರವು ಅವಳ ದೇಹ ಸಿರಿಯನ್ನು ಮತ್ತು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.... ಅವಳ ಗೆಳೆಯನೊಡನಿದ್ದರಿಂದ ಅವಳೆಡೆಗೆ ನಾವ್ಯಾರು ಹೆಚ್ಚಿಗೆ ಗಮನ ಹರಿಸಲಿಲ್ಲ. ಕಡೆ ಕ್ಷಣದಿ ಗೆಳೆಯರನ್ನು ತೊರೆದು ಪೆದ್ದು ಮರಾಟಿಯ ವಾಹನದಲ್ಲಿ ಮನೆ ತಲುಪಿದಾಗ ಬಾನೊಳು ಸೂರ್ಯನು  ಮೂಡಿಸಿದ್ದ ಕೆಂಪನೆ ಚಿತ್ತಾರವು ಮಾಯವಾಗಿತ್ತು.......

                            -- ಇಂತಿ,
                                ನಿಮ್ಮ ನಲ್ಮೆಯ ಗೆಳೆಯ,
                                 ಅವಳ ಹೃದಯದರಸ,
                                     ದಿನೇಶ್.......

Sunday, August 5, 2012

ನಾನೂ ಮತ್ತು ನನ್ನವಳು......


                                                ನಾನೂ ಮತ್ತು ನನ್ನವಳು......

              ನನ್ನ್ ಜೀವನ ಇತರ ಆಗುತ್ತೇ ಅಂತ ನಾನು ಯಾವತ್ತು ಅಂದುಕೊಂಡಿರಲಿಲ್ಲ ಕಣ್ನ್^ರೀ. ಬಿ. ಇ. ಮಾಡುವಾಗ ಮನೇಲಿ ಕೊಡಿಸಿದ್ದ ನೋಕಿಯ ೧೧೧೦(1110) ಮತ್ತು ನಾನು ೨೬೦೦(2600) ರುಪಾಯಿಯ ಸಂಬಳದ ಕೆಲಸ ಮಾಡುತ್ತಿದ್ದಾಗ ತಗೊಂಡ ನೋಕಿಯ ೬೩೦೩(6303) ಮೊಬೈಲ್ಗಳು ಒಂದೇ ಸಮಯಕ್ಕೆ ಕೈ ಕೊಟ್ಟರೆ ಎಂಗ್ ಆಗಬೇಡ ಹೇಳಿ ನನ್ನ್ ಪರಿಸ್ಥಿತಿ. ಇಗೇ ಕಿತ್ತು ಹೋಗಿರೋ ಮೊಬೈಲ್ ಗಳನ್ನ ಉಪಯೋಗಿಸುತ್ತಿರುವ ನಾನು ಮತ್ತು ನನ್ನನ್ನು ಭಾವುಕನಾನ್ನಗಿಸಿ ನನ್ನ್ ಕಣ್ನ್^ಲ್ಲೇ ಕಣ್ಣೇರು ತರಿಸಿದ "ಅವಳು".....


            ನಾನು ಹೇಗೆ ವಿಚಿತ್ರನೋ ಆಗೇ ನನ್ನ ಪ್ರೀತಿನೂ ಕೂಡ ಅಷ್ಟೇ ವಿಚಿತ್ರವಾಗಿರಬೇಕೆಂದೇ ನಾ ಬಯಸಿದ್ದೆ. ಅದು ಕೂಡ ನಡೆದೇ ಹೋಯ್ತು ಕಣ್ನ್^ರೀ. ನೋಡಿ ಮಾಡಿದ ಪ್ರೀತಿನೇ ಈಗಿನ ಕಾಲದಲ್ಲಿ ಉಳಿಯೋದಿಲ್ಲ ಅಂತಾರೆ. ಆದರೆ... ಆದರೆ ನಾನು ನನ್ನ ಹುಡುಗಿನ ನೋಡದೆ ಪ್ರೀತಿ ಮಾಡ್ಬಿಟ್ಟೆ. ಈ ನನ್ನ್ ಪ್ರೀತಿ ಇಂದಿಗೂ ಎಂದಿಗೂ ಎಂದೆಂದಿಗೂ ಅಜರಮರವಾಗಿರಲಿ ಎಂದು ನಾ ಆಶಿಸುವೆ....


               ಈ ಸಂಜೆ ಬಂದ ಮಳೆಗೆ ಈ ಕೆಳಗಿನ ಸಾಲುಗಳು ಪದೇ ಪದೇ ನೆನಪಿಗೆ ಬರುತ್ತಿವೆ.
" ನಾವಿಬ್ಬರು ಸುರಿಯುವ ಮಳೆಯಲಿ, ಮೈ ಕೊರೆಯುವ ಚಳಿಯಲಿ, ಒಂದೇ ಕೊಡೆ ಕೆಳಗೆ ಕೈ ಕೈ ಹಿಡಿದು ನಡೆಯೋ ಆಸೆಯೂ.... (ಈ ಮೇಲಿನ ಸಾಲುಗಳು ನಾನಂತು ಬರೆದಿದ್ದಲ್ಲ, ಮುರಳಿ ಮೀಟ್ಸ್ ಮೀರಾ ಸಿನಿಮಾದ್ದು....)


                 ಪ್ರಿಯೆ ನನ್ನೀ ಪುಟ್ಟ ಹೃದಯದಲಿ ನಿನಗೆಂದೇ ಪುಟ್ಟದಾದ ಕನಸಿನ ಗೂಡನ್ನೇ ಕಟ್ಟಿ, ನಿನಗಾಗಿಯೇ ಹಾತೊರೆಯುತ್ತ, ಪರಿತಪಿಸುತ್ತಾ ಕಾಯುತ್ತಿರುವೆ... ಎಂದಾದರು ಸರಿಯೇ ನನ್ನೀ ಕೊನೆಯುಸುರಿನೊಳಗೆ ಬಂದು ಸೇರುವೆ ಎಂದು ಅಂಬಲಿಸುತ್ತಿರುವ .......     




                                                       -- ಇಂತಿ, 
                                                     ನಾ ನಿನ್ನ ಪ್ರೇಮಿ ಖಂಡಿತ
                                                             ದಿನೇಶ್..... 

                                                                       

Monday, July 9, 2012

ಸವಿ(ಕಹಿ) ನೆನಪು.....


ಸವಿ(ಕಹಿ) ನೆನಪು.....

೦೮-೦೭-೨೦೧೨ ಭಾನುವಾರ...


                  ಎಷ್ಟೋ ದಿನಗಳು ಕಳೆದಿದ್ದವು ನಮ್ಮ್ ಹುಡುಗರೆಲ್ಲ ಒಂದೆಡೆ ಸೇರಿ ಮಜಾ ಮಾಡಿ... ಕಳೆದ ಶನಿವಾರ ಬಹುದಿನಗಳ ನಂತರ ಗೌಡನ್ನ್ ನೋಡಿದ್ದು... ಅಲ್ಲೇ ಪಕ್ಕದಲ್ಲೇ ಇದ್ದ ಬಾರಿನಲ್ಲಿ ಹೋಗಿ ಕೂತೆವು... (ಬಾಟ ಮತ್ತು ನಾನು ಮುಂಚೆ ಹಲವು ಸರಿ ಕುಡಿದೆದ್ದು ಬಂದ ಜಾಗ ಅದು). ಗಾಬರಿ ಮತ್ತು ಎಸ್. ಎಸ್. ಅಮಲೆರಿಸಿಕೊಂಡಿದ್ದು, ಎಸ್.ಎಸ್. ಅದೇ ಮತ್ತಿನಲ್ಲಿ ನಾಚಿಕೆ ಆಗ್ತಾ ಇದೆ ಅಂದಿದ್ದು... ಅಹೋ ರಾತ್ರಿಯಲ್ಲಿ ಗೌಡನ ಪೆದ್ದುತನ, ಇರುಳು ರಾತ್ರಿ ಒಂದು ಗಂಟೆಯ ಸಮಯದಿ ಅಭಿಯು ಪೊಲೀಸರಿಗೆ ಇಟ್ಟ ಹಾವಳಿ.... ಮರುದಿನ ಮತ್ತೆ ಬೈಕು, ಕಾರುಗಳಲ್ಲಿ ಸುತ್ತಾಡಿದ್ದು, ಚಂದ್ರೆಗೌಡನ ನೆಂಟರ ಮನೆಯ ಮಾಂಸದ ಊಟ, ಪುಟ್ಟನ ಎರಡು ಗಂಟೆಯ ಸ್ನಾನ, ದಂಡುಪಾಳ್ಯ ಸಿನಿಮ ನೋಡಿದ್ದು, ಕೊನೆಗೆ ಮರಾಠಿಯ ಮೆಚ್ಚಿನ ಹಾಗು ನಾನು ಎಂದಿಗೂ ದುಡ್ಡು ಕೊಡದೇ ತಿಂದ ನ್ಯಾಚುರಲ್ ಐಸ್ ಕ್ರೀಂ.....


                ಅಂತು ವಾರದ ಕೊನೆಯ ರಜಗಳು ನನ್ನೀ ಮನವನ್ನು ಪ್ರಫುಲತೆ ಇಂದಿರುವಂತೆ ಮಾಡಿತ್ತು... ಮನೆ ಸೇರಿದ ನಂತರ ತುಂಬಾನೇ ಯೋಚನೆಗೊಳಪಡಿಸಿದ ಮತ್ತು ಬೇಜಾರು ಮೂಡಿಸಿದ ವಿಷಯ -  ಅದು ಗೌಡನ ಜೊತೆ ನಡೆದ ಒಂದು ಸಣ್ಣ ಮಾತುಕತೆ.


                  ಇನ್ನು ೧೨ ತಿಂಗಳಲ್ಲೇ ಗೌಡ ಮದುವೆ ಆಗುವ ಎಲ್ಲಾ ಲಕ್ಷಣಗಳು ಎದ್ದು ತೋರುತ್ತಿವೆ. ಆದರೆ ಮದುವೆಗೆ ಮುಂಚೆನೇ ತನ್ನನ್ನೇ ತಾನು ವ್ಯಾಪಾರಕ್ಕೆ  (ವರದಕ್ಷಿಣೆ) ಇಟ್ಟು ಕೊಂಡಿರುವ ಗೌಡನನ್ನು ನೋಡಿ ನನ್ನೀ ಮನಸ್ಸೇಕ್ಕೋ ಮಮ್ಮಲ ಮರುಗುತ್ತಿದೆ....


                           ಇದಕ್ಕೆ ಗೌಡನ ವಿಮರ್ಶೆ ----> ತಾನು ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲವಂತೆ. ಆದರೆ......... ಆದರೆ ಹೆಣ್ಣಿನ ಮನೆಯವರು ಕೊಡುವುದೆಲ್ಲವನ್ನು ಮದುವೆಯ ಉಡುಗೊರೆ ಎಂದು ಭಾವಿಸಿ ಸ್ವೀಕರಿಸುತ್ತಾನಂತೆ.


            ಛೇ.... ನಮ್ಮ್ ಹುಡುಗ ಈ ತರ ಅಂಥಾ ನಾನು ಎಂದು ಅಂದುಕೊಂಡಿರಲಿಲ್ಲ... ಭವ್ಯ ಭಾರತದ ಕನಸನ್ನು ಕಂಡ ನಾವೆಲ್ಲಾ ಎಲ್ಲಿ ಸಾಗುತ್ತಿದ್ದೇವೆ. ಯುವಪೀಳಿಗೆ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಆದರ್ಶಮುಖಿಯಾಗಿರಬೇಕು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.. ವರದಕ್ಷಿಣೆ ಎಂಬ ಪೀಡೆ ನಮ್ಮಿ ಭಾರತದಿಂದ ತೊಲಗುತ್ತಿದೆ ಎಂದು ನಾ ನಂಬಿದ್ದೆ. ಆದರೆ ಅದೆಲ್ಲ ಸುಳ್ಳೆಂದು ನನಗಿಂದು ಅರಿವಾಗುತ್ತಿದೆ..


        ಎಲ್ಲರು ಹೇಳುವರು ಈ ಸಮಾಜದ ವ್ಯವಸ್ಥೆನೇ ಸರಿ ಇಲ್ಲ ಎಂದು. ಆದರೆ ಯಾರು ಕೂಡ ವ್ಯವಸ್ಥೆ ಸರಿಪಡಿಸುವ ಗೋಜಿಗೆ ಹೋಗುತಿಲ್ಲ. ಇನ್ನು ಕೆಲವರು ಹೇಳುತ್ತಾರೆ, ಈ ಸಮಾಜದ ವ್ಯವಸ್ಥೆಯನ್ನು ಬದಲಾಯಿಸಲು ಹೊರಟರೆ ಈ ವ್ಯವಸ್ಥೆಯೇ ನಮ್ಮನ್ನು ಬದಲಾಯಿಸುತ್ತದ್ದೆ ಎಂದು. ಪ್ರತಿ ಒಬ್ಬರು ಸ್ವಪ್ರಯತ್ನದಿಂದ ತಮ್ಮ ತಮ್ಮನು ವ್ಯವಸ್ಥೆಯ ಬದಲಾವಣೆಗೆ ತೊಡಗಿಕೊಂಡರೆ ತನ್ನಿಂತಾನೆ ಈ ಸಮಾಜದ ವ್ಯವಸ್ಥೆಯೇ ಬದಲಾಗುತ್ತದೆ....


                         ಯುವಪೀಳಿಗೆಗೆ ಅಂದು ವಿವೇಕಾನಂದರು ಕೊಟ್ಟ ಸಂದೇಶ " ಏಳಿ, ಎದ್ದೇಳಿ ಯುವ ಜನತೆ, ಎಂದಿಗೂ ನಿಲ್ಲದಿರಿ ಗುರಿ ಮುಟ್ಟುವ ತನಕ".... ಆದರೆ ನಮ್ಮೀ ಯುವಜನತೆ ಇಂದಿಗೂ ತೂಗುಡಿಸುತ್ತಲೇ  ಇದೆ... 




                                                                         -- ಇಂತಿ ನಿಮ್ಮ,
                                                                            ದಿನೇಶ್..... 

Monday, February 6, 2012

ಪ್ರೀತಿಯ ಅರಗಿಣಿ.....


ಪ್ರೀತಿಯ ಅರಗಿಣಿ,


        ಭುವಿಯೊಳು ನೆಟ್ಟ ಪ್ರತಿ ಬೀಜವು ಚಿಗುರೊಡೆಯಲು ಹಾತೊರೆಯುತ್ತಿರುವ, ಆಗೆಯೇ ನಾನು ಕೂಡ ನಿನ್ನ ಅನುರಾಗದಲ್ಲಿ ಮಿಳಿತವಾಗಬೇಕೆಂದು ಬಯಸುತ್ತಿರುವೆ.

        ನನ್ನ ನಿನ್ನ ನಡುವೆ ಮೊದಲ ಬಾರಿಗೆ ಪುಟ್ಟದೊಂದು ಮನಸ್ತಾಪ ಬಂದಾಗ ನನ್ನಲ್ಲಿ  ಮೂಡಿದ ಕೆಲವು ಸಾಲುಗಳು, ನನ್ನಯ ಹೃದಯದರಸಿ ಕನಸಿನ ರಾಣೆಗೆಂದೇ ಅರ್ಪಣೆ ಸಮರ್ಪಣೆ.....


          " ಎಂದಿಗೂ ಫಲ ಕೊಡದ ಬೀಜದ೦ತಿರಲು ನಿನ್ನಯ ಹಸ್ತದಿ ಚಿಮುಕಿಸಿದ ಪನ್ನೀರು ಎನಗೆ ಅಮೃತವೇ ದೊರೆತಂತೆ ಬದುಕಬೇಕೆ೦ಬ ಆಸೆಯೂ ಮೂಡಿಸಿದೆ.


          ಚಿಗುರನ್ನೇ ಕಾಣದ ಈ ದೇಹ ಅವಳ ಸ್ಪರ್ಶಕ್ಕೆ, ಎಲ್ಲೆಡೆಯೂ ಹಚ್ಚ ಹಸಿರನ್ನೇ ಹೊದ್ದು ತಳಿರಾಗಿ ನಲಿಯುತಿದೆ.


          ಎಂದೆದಿಗೂ ಅರಳದ ಪ್ರೀತಿಯ ಮೊಗ್ಗು ನಿನ್ನಯ ಕಿರುಗಣ್ಣಿನ ನೋಟಕ್ಕೆ ಅರಳಿದೆ.


          ಬರೀಯ  ಕಾಯಲ್ಲೇ ರುಚಿ ಎಂದಿದ್ದ ಈ ತನುಮನವು ಹಣ್ಣಲ್ಲೂ ರುಚಿ ಇದೇ ಎನ್ನುವ ಪರಿಬಾಷೆ ತಂದವಳು ನೀನು.


         ಮಾಗಿ ಗಾಲದೀ ಬೀಸುವ ಗಾಳಿಗೆ ಉದುರುವ ತರಗಲೆಯಾಗುವ ಮುನ್ನವೇ ನನ್ನನ್ನು ಸಮರ್ಪಿಸಿಕೋ.........."




                                   -- ಇಂತಿ,
                               ನಿನ್ನ ನಗುಮೊಗವ ಕಾಣಲೆಂದೇ ಇಂದಿಗೂ ಕಾಯುತಿರುವ,


                                 ನಿನ್ನಯ ಪ್ರೀತಿಯ ಒಡೆಯ..........