ಕರುನಾಡು ಕಂಡ ಧೀಮಂತ ವ್ಯಕ್ತಿಗಳಲ್ಲಿ ನಮ್ಮ ನಿಮ್ಮೆಲ್ಲರ ಶಂಕರಣ್ಣ ಕೂಡ ಒಬ್ಬರು..... ಅವರು ನಮ್ಮನ್ನು ಅಗಲಿ ಆಗಲೇ ಎರಡು ದಶಕಗಳೇ ಸಂದಿವೆ.... ಅದರೂ ಶಂಕರಣ್ಣನ ನೆನಪು ನಮ್ಮೆಲ್ಲರಲ್ಲೂ ಇಂದಿಗೂ ಹಸಿಹಸಿಯಾಗೇ ಇದೆ.... ಅಂಥಾ ಅಸಾಮಾನ್ಯ ವ್ಯಕ್ತಿ ನಮ್ಮ ಶಂಕರ್ ನಾಗ್. ಶಂಕರಣ್ಣ ಇಂದು ನಮ್ಮೊಂದಿಗಿದಿದ್ದರೆ ಕನ್ನಡ ಚಿತ್ರೋದ್ಯಮವನ್ನು ವಿಶ್ವದಲ್ಲೇ ಉನ್ನತ ಮಟ್ಟದಲ್ಲಿ ಏರಿಸಿರುತ್ತಿದ್ದರು..... ಶಂಕರಣ್ಣ ನೀವ್ ಎಲ್ಲೆ ಇರಿ ಹೇಗೆ ಇರಿ ಎಂದಿದಿಗೂ ನಾವು ನಿಮ್ಮನ್ನು ಮರೆಯೋದೆ ಇಲ್ಲ ಬಿಡಿ.... ಶಂಕರಣ್ಣನ ಆತ್ಮವು ಎಂದಿಗೂ ಎಂದಿದಿಗೂ ನಮ್ಮಲ್ಲೇ ಲೀನವಾಗಿರಲಿ...
ಇಂತಿ ನಿಮ್ಮ ಪ್ರೀತಿಯ,
ದಿನೇಶ್